ದುಡಿಮೆಗಾರರು

ದುಡಿಮೆಗಾರರಣ್ಣ ನಾವು ದುಡಿಮೆಗಾರರು
ಎದೆಯ ತಂತಿ ಮೀಟಿ ನುಡಿವ ಹಾಡುಗಾರರು ||

ಕೆರೆಕುಂಟೆಗಳ ಕಟ್ಟುತ ನಾವು
ಬೆವರ ನೀರನು ಹರಿಸಿದೆವು
ಕಳೆಯ ಕೀಳುತ ಬೆಳೆಯ ಬೆಳೆಯುತ
ಒಡೆಯನ ಒಡಲನು ತುಂಬಿದೆವು ||

ಚಿಟ್ಟೆಕಂಗಳ ಬಟ್ಟೆಯ ನೇದು
ಬೆತ್ತಲೆ ಬದುಕನು ಉಂಡಿಹೆವು
ಕೊಳೆಯನು ತೊಳೆದು ಕಾಂತಿ ಕೊಟ್ಟವರು
ಬೆಳಕನು ಹುಡುಕಿ ಹೊರಟಿಹೆವು ||

ಕಾದ ಕಬ್ಬಿಣಕೆ ರೂಪಕೊಟ್ಟೆವು
ಸುಖದ ದಿನಕಾಗಿ ಕಾದಿಹೆವು
ಚಳಿ ಮಳೆ ಗಾಳಿಗೆ ಕಂಬಳಿ ನೇದೆವು
ಗಡಗಡ ನಡುಗುತ ಕೂತಿಹೆವು ||

ಸೂರು ಇಲ್ಲದೆ ಊರ ಕಾದೆವು
ಜೇಡರ ಬಲೆಯ ಜೇಡರ ಬದುಕು
ಬಲೆಗಳ ಬೀಸಿ ಮೀನು ಹಿಡಿದೆವು
ಮೀನಾದೆವು ನಾವೇ ಬಿಡುಗಡೆ ಬೇಕು ||

ಅರೆಗಳ ಹೊಡೆದವು ಹೊರೆಗಳ ಹೊತ್ತೆವು
ಮೆಟ್ಟು ಹೊಲೆಯುತ ಹಸಿಯಿತು ಹೊಟ್ಟೆ
ಕಾರ್ಖಾನೆಯ ಹೊಗೆಯಾಗಿ ಬಂದೆವು
ಹಗೆಯಾಯಿತೆ ಬಾಳು, ಬಾರದೆ ಪ್ರೀತಿ? ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬುದ್ಧ, ಶರಣರು ಮತ್ತು ದಲಿತಪರ ಚಿಂತನೆ
Next post ಬಾಲ ಕಾರ್‍ಮಿಕ

ಸಣ್ಣ ಕತೆ

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

cheap jordans|wholesale air max|wholesale jordans|wholesale jewelry|wholesale jerseys